ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ಆಹಾರದಲ್ಲಿ ಜಿರಳೆ, ಆಕ್ರೋಶಗೊಂಡ ಪ್ರಯಾಣಿಕರು

Jul 29, 2023 - 11:49
 0  28

Google  News WhatsApp Telegram Facebook

ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ಆಹಾರದಲ್ಲಿ ಜಿರಳೆ, ಆಕ್ರೋಶಗೊಂಡ ಪ್ರಯಾಣಿಕರು

Janaa Akrosha News Desk.

ಭೂಪಾಲ್(ಮಧ್ಯಪ್ರದೇಶ),ಜು.28- ವಂದೇ ಭಾರತ್ ಎಕ್ಸ್ಪ್ರೆಸ್ನಲ್ಲಿ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾಪೆರ್ರೇಷನ್ (ಐಆರ್ಸಿಟಿಸಿ ) ಪ್ರಯಾಣಿಕರಿಗೆ ನೀಡಿದ ಉಪಹಾರದಲ್ಲಿ ಜಿರಳೆ ಕಾಣಿಸಿಕೊಂಡಿದೆ.ಭೋಪಾಲ್ ರಾಣಿ ಕಮಲಾಪತಿ ಯಿಂದ ದೆಹಲಿಯ ಹಜರತ್ ನಿಜಾಮುದ್ದೀನ್ಗೆ ವಂದೇ ಭಾರತ್ ಎಕ್ಸ್ಪ್ರೆಸ್ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರಿಗೆ ನೀಡಿದ್ದ ಆಹಾರದಲ್ಲಿ ಜಿರಳೆ ಪತ್ತೆಯಾಗಿದೆ. ಕುರಿತು ಆವರು ದೂರು ನೀಡಿದ ಹಿನ್ನಲೆಯಲ್ಲಿ ರೈಲ್ವೆ ಇಲಾಖೆಯು ಅಡುಗೆ ಪರವಾನಗಿದಾರರ ವಿರುದ್ಧ ಕ್ರಮ ಕೈಗೊಂಡಿದೆ.

ಜು.24ರಂದು ಭೋಪಾಲ್ನಿಂದ ಗ್ವಾಲಿಯರ್ಗೆ ಕೋಚ್ ಸಂಖ್ಯೆ 20171 ಸೀಟ್ ಸಂಖ್ಯೆ 57ರಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಉಪಾಹಾರಕ್ಕಾಗಿ ತೆಗೆದುಕೊಂಡ ಪರೋಟದಲ್ಲಿ ಜಿರಳೆ ಪತ್ತೆಯಾಗಿತ್ತು. ಕೂಡಲೇ ರೈಲುಗಳಲ್ಲಿ ನೀಡಲಾಗುವ ಆಹಾರದ ಗುಣಮಟ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿದ ಇತರೆ ಪ್ರಯಾಣಿಕರು, ತಿಂಡಿಯಲ್ಲಿ ಜಿರಳೆ ಇರುವ ಫೋಟೋಗಳನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದರು. ಮಾಹಿತಿ ಗಮನಕ್ಕೆ ಬಂದ ತಕ್ಷಣ, ರೈಲಿನಲ್ಲಿದ್ದ ಐಆರ್ಸಿಟಿಸಿ ಅಧಿಕಾರಿಗಳು ತಕ್ಷಣವೇ ಪ್ರಯಾಣಿಕರನ್ನು ಸಂಪರ್ಕಿಸಿ, ತ್ವರಿತ ಕ್ರಮ ಕೈಗೊಂಡು ಪರ್ಯಾಯ ಆಹಾರದ ವ್ಯವಸ್ಥೆ ಮಾಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಐಆರ್ಸಿಟಿಸಿ ಕ್ಷಮೆ ಯಾಚಿಸಿದೆ. ಆಹಾರ ಸೇವೆ ಒದಗಿಸುವ ಲೈಸೆನ್ಸ್ದಾರರಿಗೆ ದಂಡ ವಿಧಿಸಿದೆ. ಜೊತೆಗೆ, ಅಡುಗೆಮನೆಯಲ್ಲಿ ಆಹಾರ ತಯಾರಿಸುವ ಮುನ್ನ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದೆ. ಹಾಗೂ ಅಡುಗೆ ಕೋಣೆಯನ್ನು ಕಾಲಕಾಲಕ್ಕೆ ಪರಿಶೀಲಿಸಲು ನಿರ್ಧರಿಸಿದೆ.

ಭಾರತೀಯ ರೈಲ್ವೆ ಕೂಡ ಆರೋಪಿಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ ಮತ್ತು ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಕ್ರಮ ಕೈಗೊಳ್ಳಲು ತಿಳಿಸಿದೆ. ಭವಿಷ್ಯದಲ್ಲಿ ಇಂತಹ ದೂರುಗಳು ಕಂಡು ಬಂದರೆ ಐಆರ್‍ಸಿಟಿಸಿ ಮತ್ತು ಪರವಾನಗಿದಾರರಿಬ್ಬರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಕಡಿಮೆ ದರದಲ್ಲಿ ಪ್ರಯಾಣಿಕರಿಗೆ ಆಹಾರ : ವಿಶ್ವದ ಅತಿದೊಡ್ಡ ರೈಲ್ವೆ ಫ್ಲಾಟ್ ಫಾರಂ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಜೊತೆಗೆ ಸಾಕಷ್ಟು ಜನಪರ ಕಾರ್ಯ ಮಾಡಿರುವ ನೈಋತ್ಯ ರೈಲ್ವೆ ವಲಯವು ಇದೀಗ ಪ್ರಯಾಣಿಕರಿಗೆ ಕಡಿಮೆ ದರದಲ್ಲಿಯೇ ಗುಣಮಟ್ಟದ ಆಹಾರ ಪದಾರ್ಥಗಳನ್ನು ನೀಡುತ್ತಿದೆ. ಐಆರ್‍ಸಿಟಿಸಿ ಹಾಗೂ ಎಸ್‍ಡಿಬ್ಲ್ಯೂಆರ್ ಸಹಯೋಗದೊಂದಿಗೆ ರೈಲ್ವೆ ಫ್ಲಾಟ್ ಫಾರಂ ಮೇಲೆ ಜನತಾ ಖಾನಾ ಹಾಗೂ ಸ್ನ್ಯಾಕ್ ಮೀಲ್ಸ್ ಹೆಸರಲ್ಲಿ ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಆಹಾರ ಒದಗಿಸುತ್ತಿದೆ.

ರೈಲ್ವೆ ಪ್ರಯಾಣಿಕರಿಗೆ ಆರೋಗ್ಯಯುತ ಆಹಾರ ನೀಡುವ ನಿಟ್ಟಿನಲ್ಲಿ 20 ರೂ.ಗೆ ಜನತಾ ಖಾನಾ, 50 ರೂ.ಗೆ ಸ್ಕ್ಯಾಕ್ ಮೀಲ್ಸ್ ನೀಡುವುದರ ಮೂಲಕ ಪ್ರಯಾಣಿಕರ ಹಸಿವನ್ನು ನೀಗಿಸುವ ಕಾರ್ಯ ಮಾಡುತ್ತಿದೆ. ಎಸ್.ಡಬ್ಲೂ.ಆರ್ ವಲಯದ 51 ರೈಲ್ವೆ ನಿಲ್ದಾಣದಲ್ಲಿರುವ ಸ್ಟಾಲ್ ಮೂಲಕ ವಿತರಣೆ ಮಾಡಲಾಗುತ್ತಿದೆ.

ಜನ ಆಕ್ರೋಶ ಕನ್ನಡ ಪಾಕ್ಷಿಕೆ ಪತ್ರಿಕೆಗೆ ವರದಿಗಾರರಾಗಲಿ, ಚಂದಾದಾರರಾಗಲು, ವರದಿಗಳನ್ನು ಮತ್ತು ಲೇಖನಗಳನ್ನು ಪ್ರಕಟಿಸಲು ಹಾಗೂ ಜಾಹಿರಾತು ನೀಡಲು 9845968164 ಸಂಪರ್ಕ ಸಂಖ್ಯೆಯನ್ನು ಸಂಪರ್ಕಿಸಬಹುದು.

Google  News WhatsApp Telegram Facebook
HTML smaller font

.

.