ನೊಂದವರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಿ : ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ ಅನುಸೂಚಿತ ಜಾತಿ, ಪಂಗಡಗಳ ದೌರ್ಜನ್ಯ ನಿಯಂತ್ರಣ

Sep 10, 2023 - 08:49
 0  10

Google  News WhatsApp Telegram Facebook

ನೊಂದವರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಿ : ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ ಅನುಸೂಚಿತ ಜಾತಿ, ಪಂಗಡಗಳ ದೌರ್ಜನ್ಯ ನಿಯಂತ್ರಣ

Janaa Akrosha News Desk.

ಜಾಗೃತಿ ಸಮಿತಿಯ ಸಭೆ

 

ಯಾದಗಿರಿ; ಸೆಪ್ಟೆಂಬರ್ ೦೯, (.ವಾ) : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ

ವರ್ಗಗಳ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳನ್ನು

ಕಡಿಮೆ ಮಾಡುವ ಜೊತೆಗೆ ದಾಖಲಾದ ಪ್ರಕರಣಗಳನ್ನು

ಸಮರ್ಥವಾಗಿ ನಿರ್ವಹಿಸಲು ಪೊಲೀಸ್ ಇಲಾಖೆ, ಸಮಾಜಕಲ್ಯಾಣ ಇಲಾಖೆ

ಮತ್ತು ಕಂದಾಯ ಇಲಾಖೆ ಇನ್ನಿತರ ಸಂಬAಧಪಟ್ಟ ಇಲಾಖೆ

ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕೆಲಸ

ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ ಅವರು

ನಿರ್ದೇಶಿಸಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ ನಡೆದ

ಜಿಲ್ಲೆಯ ಅನುಸೂಚಿತ ಜಾತಿ, ಪಂಗಡಗಳ ದೌರ್ಜನ್ಯ ನಿಯಂತ್ರಣ

ಜಾಗೃತಿ ಸಮಿತಿಯ ಸಭೆಯಲ್ಲಿ ಸದಸ್ಯರು ಕೋರಿಕೆಗೆ ಸ್ಪಂದಿಸಿ

ಅವರು ಮಾತನಾಡಿದರು.

ಶೋಷಣೆ ಮಾಡಿದವರಿಗೆ ಕಾನೂನಿನಡಿ ಆಗುವ ಪರಿಣಾಮಗಳ

ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮತ್ತು ದೌರ್ಜನ್ಯ

ಪ್ರಕರಣಗಳಲ್ಲಿ ನೊಂದವರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ

ಸೂಕ್ತ ಕ್ರಮ ಕೈಗೊಳ್ಳಲು ಸಂಬAಧಿಸಿದ ಅಧಿಕಾರಿಗಳಿಗೆ

ಜಿಲ್ಲಾಧಿಕಾರಿ ಸೂಚಿಸಿದರು.

ಪರಿಶಿಷ್ಟ ಜಾತಿ/ವರ್ಗಗಳ ಮೇಲಿನ ದೌರ್ಜನ್ಯ ಅಧಿನಿಯಮ

ಅನ್ವಯ ದಾಖಲಾದ ಪ್ರತಿಯೊಂದು ಪ್ರಕರಣಕ್ಕೆ ಸಂಬAಧಿಸಿದAತೆ

ಪರಿಹಾರ ಧನ ಮಂಜೂರು ಮಾಡಬೇಕು. ಪರಿಹಾರ ನೀಡುವಲ್ಲಿ

ಯಾವುದೇ ರೀತಿಯ ವಿಳಂಬವಾಗದAತೆ ಕ್ರಮವಹಿಸಲು

ಜಿಲ್ಲಾಧಿಕಾರಿ ಸೂಚಿಸಿದರು.

ಸಮಿತಿಯ ಸದಸ್ಯರೊಬ್ಬರು ಮಾತನಾಡಿ ದೌರ್ಜನ್ಯ

ಪ್ರಕರಣಗಳು ನಡೆದರು ತಪ್ಪಿತಸ್ಥರಿಗೆ ಬಂಧಿಸಿ,

ಜನಾAಗದವರ ಮೇಲೆ ನಡೆಯುವ ದೌರ್ಜನ್ಯವನ್ನು

 

ನಿಯಂತ್ರಿಸಬೇಕೆAದು ಸಭೆಗೆ ಕೋರಿದರು. ಇದಕ್ಕೆ ಸ್ಪಂದಿಸಿದ

ಡಿವೈಎಸ್ಪಿ ಅವರು ಯಾವುದೇ ದೌರ್ಜನ್ಯ ಪ್ರಕರಣಗಳು

ನಡೆದರೆ ಅದನ್ನು ತನಿಖೆ ನಡಸಿ. ಯಾವುದೇ ಕಾರಣಕ್ಕೂ

ತಪ್ಪಿತಸ್ಥರನ್ನು ರಕ್ಷಣೆ ಮಾಡದೆ ತ್ವರಿತ ವಾಗಿ ಕಾನೂನು

ಪ್ರಕಾರ ಶಿಕ್ಷೆಗೆ ಒಳಪಡಿಸಲಾಗುತ್ತದೆ. ಕುರಿತಂತೆ ಜಿಲ್ಲೆಯ

ಎಲ್ಲ ಪೊಲೀಸ್ ಠಾಣೆಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು

ಸಭೆಗೆ ವಿವರಿಸಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರು ಸಾಲ ಸೌಲಭ್ಯ ಕೋರಿ

ವಿವಿಧ ಬ್ಯಾಂಕ್ಗಳಿಗೆ ಹೋದ ಸಂದರ್ಭದಲ್ಲಿ ಸಕಾಲಕ್ಕೆ ಸಾಲ ಸೌಲಭ್ಯ

ಕಲ್ಪಿಸಲು ತಾರತಮ್ಯ ಮಾಡದೇ ಅರ್ಹ ಫಲಾನುಭವಿಗಳಿಗೆ

ನೆರವಾಗಬೇಕೆಂದು ಸಮಿತಿಯ ಸದಸ್ಯರು ಕೋರಿದರು, ಅರ್ಜಿ

ಸಲ್ಲಿಸಿರುವ ಫಲಾನುಭವಿಗಳ ಬಗ್ಗೆ ಪರಿಶೀಲಿಸಿ ಸಕಾಲಕ್ಕೆ ಅವರಿಗೆ

ಸ್ಪಂದಿಸುವAತಾಗಬೇಕು. ವಿವಿಧ ಬ್ಯಾಂಕ್ಗಳ ಮೂಲಕ

ಸಕಾರಾತ್ಮಕ ಸ್ಪಂದನೆಯಾಗುವAತೆ ನೋಡಿಕೊಳ್ಳಲು

ಸಂಬAಧಿಸಿದವರಿಗೆ ಸೂಚಿಸಿಲಾಗುವುದು ಎಂದು ಜಿಲ್ಲಾಧಿಕಾರಿ

ತಿಳಿಸಿದರು

ದಲಿತರ ಮೇಲಿನ ದೌರ್ಜನ್ಯ ನಿಯಂತ್ರಿಸಲು ಸರಕಾರದಿಂದ

ಜಾಗೃತಿ ಮೂಡಿಸಲು ಪೋಲೀಸ್ ಇಲಾಖೆ , ಸಮಾಜ ಕಲ್ಯಾಣ ಇಲಾಖೆ

ಹಾಗೂ ಇತರ ಇಲಾಖೆಗಳ ಮೂಲಕ ಗ್ರಾಮಗಳಲ್ಲಿ ಜಾಗೃತಿ

ಮೂಡಿಸಲು ಎಂದು ಸೂಚಿಸಿದರು. ಜಿಲ್ಲೆಯ ಎಲ್ಲಾ ತಾಲೂಕಿನ

ಗ್ರಾಮಗಳಲ್ಲಿ ಎನ್.ಜಿ. (ಓಉಔ) ಮೂಲಕ ಬೀದಿ ನಾಟಕ ಮೂಲಕ

ಜಾಗೃತಿ ಮೂಡಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶಿಸಿದರು.

ಸಮಿತಿಯ ಸದಸ್ಯರಾದ ನಾಗಣ್ಣ ಬಡಿಗೇರಾ ಮಾತನಾಡಿ, ಯಾದಗಿರಿ

ತಾಲೂಕಿನ ಕಿಲ್ಲನಕೇರಾ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ರೈತರು

ತಮ್ಮ ಜಮೀನಿಗೆ ತೆರಳಲು ಸರಿಯಾದ ರಸ್ತೆ ಇಲ್ಲದೆ

ನರಕಯಾತನೆ ಅನುಭವಿಸುತ್ತಿದ್ದು, ಹೊಲಕ್ಕೆ ರಸ್ತೆ

ಮಾಡಿಕೊಡಬೇಕು ಹಾಗೂ ಕೆಲವು ಬಡ ಪರಿಶಿಷ್ಟ ವರ್ಗದ ಜನರು

ಗುಡಿಸಲಿನಲ್ಲಿಯೇ ವಾಸಿಸುತ್ತಿದ್ದು ಮಳೆ ಬಂದಾಗ

ರಕ್ಷಿಸಿಕೊಳ್ಳಲು ಗುಡಿಸಲಿಗೆ ಸಿಮೆಂಟ್ ಮಾಡಿಕೊಂಡಿದ್ದಾರೆ ಅಂತಹ

ಬಡ ಕುಟುಂಬಕ್ಕೆ ಸರ್ಕಾರದಿಂದ ಮನೆ ಮಂಜೂರು ಮಾಡಲು

ಕೋರಿದರು. ಸ್ಪಂದಿಸಿದ ಜಿಲ್ಲಾಧಿಕಾರಿಯು ಸಮಸ್ಯೆಯ

ಇತ್ಯರ್ಥಕ್ಕೆ ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗುವುದು

ಎಂದು ಭರವಸೆ ನೀಡಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿ ನಿಲಯಗಳಿಗೆ

ಅಧಿಕಾರಿಗಳು ಆಗಾಗ ದಿಢೀರ್ ಭೇಟಿ ನೀಡಿ ಮಕ್ಕಳಿಗೆ

ನೀಡುತ್ತಿರುವ ಮೂಲ ಸೌಕರ್ಯ, ಆಹಾರದ ಗುಣಮಟ್ಟದ ಬಗ್ಗೆ

ಮಾಹಿತಿ ಪಡೆದುಕೊಳ್ಳಿ, ವಿದ್ಯಾರ್ಥಿ ನಿಲಯದ ಸ್ವಚ್ಛತೆ, ಇನ್ನಿತರ

ಸೌಕರ್ಯಗಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ

ಜಿಲ್ಲಾಧಿಕಾರಿ ಸೂಚಿಸಿದರು.

 

ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ ಸಂಗೀತಾ, ಡಿವೈಎಸ್ಪಿ

ಬಸವೇಶ್ವರ, ಸಮಾಜ ಕಲ್ಯಾಣ ಇಲಾಖಾಧಿಕಾರಿ ಕು.ಸರೋಜಾ,

ಪರಿಶಿಷ್ಟ ವರ್ಗಗಳ ಇಲಾಖಾಧಿಕಾರಿ ಪ್ರಭುದೊರೆ, ದೌರ್ಜನ್ಯ ಸಮಿತಿ

ಸದಸ್ಯರಾದ ನಾಗಣ್ಣ ಬಡಿಗೇರ, ರಮೇಶ ದೊರೆ ಆಲ್ದಾಳ,

ರಮಾದೇವಿ ಕಿಲ್ಲನಕೇರಾ, ಆರ್ಟಿಓ ಅಧಿಕಾರಿ ಮಿಲಿಂದಕುಮಾರ ಎಸ್ ಎಸ್,

ಪೊಲೀಸ್ ಇನ್ಸ್ ಪೆಕ್ಟರ್ ದೇವಿಂದ್ರಪ್ಪ, ಜೆಸ್ಕಾಂ ಅಧಿಕಾರಿ

ರಾಘವೇಂದ್ರ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿ

ಕು.ದೀಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Google  News WhatsApp Telegram Facebook
HTML smaller font

.

.