ರಾಜ್ಯ

ಯಲಬುರ್ಗಾ ತಾಲೂಕಿನ ಲಕಮನಗುಳೆ ಗ್ರಾಮದ ಫಲವತ್ತಾದ ಜಮೀನುಗಳಲ್ಲಿ ಪವರ್ ಗ್ರಿಡ್ ಸ್ಟೇಷನ್ನಿಗೆ ಭೂ ಸ್ವಾಧೀನ ಕೈ ಬಿಡಲು ಒತ್ತಾಯಿಸಿ ಪ್ರತಿಭಟನಾ ಧರಣಿ

WhatsApp Group Join Now
Telegram Group Join Now

ಕೊಪ್ಪಳ : ಜಿಲ್ಲೆಯ ಯಲಬುರ್ಗಾ ತಾಲೂಕಿನ ಲಕಮನಗುಳೆ ಗ್ರಾಮದ ಫಲವತ್ತಾದ ಜಮೀನುಗಳಲ್ಲಿ ಪವರ್ ಗ್ರಿಡ್ ಸ್ಟೇಷನ್ನಿಗೆ ಭೂ ಸ್ವಾಧೀನ ಮಾಡಿಕೊಳ್ಳುವುದನ್ನು ಕೈ ಬಿಡಲು ಒತ್ತಾಯಿಸಿ ಕೊಪ್ಪಳ ಜಿಲ್ಲಾ ಆಡಳಿತ ಭವನದ ಎದುರು ಕರ್ನಾಟಕ ಪ್ರಾಂತ ರೈತ  ಸಂಘದ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಹಾಗೂ ರೈತರು ಪ್ರತಿಭಟನಾ ಧರಣಿ ನಡೆಸಿ ಉಪ ವಿಭಾಗಾಧಿಕಾರಿಗಳು ಹಾಗೂ ಭೂ ಸ್ವಾಧೀನಾಧಿಕಾರಿಗಳಿಗೆ ಸಹಾಯಕ ಆಯುಕ್ತರ ಕಛೇರಿಯ ಗ್ರೇಡ್ ಟು ತಹಶೀಲ್ದಾರ್ ರಜನಿಕಾಂತ್ ಕೆಂಗೇರಿ ಇವರ ಮುಖಾಂತರ ಸೋಮವಾರ ಸಂಜೆ ಮನವಿ ಪತ್ರ ಸಲ್ಲಿಸಿದರು.
      ಮನವಿಯಲ್ಲಿ ಜಿಲ್ಲೆಯ ಯಲಬುರ್ಗಾ ತಾಲೂಕಿನ ಲಕಮನಗುಳೆ ಗ್ರಾಮಕ್ಕೆ ಸೇರಿದ ಫಲವತ್ತಾದ ಜಮೀನುಗಳಲ್ಲಿ ಪವರ್ ಗ್ರಿಡ್ ಸ್ಟೇಷನ್ ಗಾಗಿ ಭೂ ಸ್ವಾಧೀನಕ್ಕೆ ಕ್ರಮ ವಹಿಸಿದ್ದೀರಿ. ಪವರ್ ಗ್ರಿಡ್ ಸ್ಟೇಷನ್ ನಿರ್ಮಾಣವನ್ನು ನಾವು ಸ್ವಾಗತಿಸುತ್ತೇವೆ.ಆದರೆ  ಅದಕ್ಕಾಗಿ ಅತ್ಯಂತ ಫಲವತ್ತಾದ ಬಹು ವಾರ್ಷಿಕ  ಬೆಳೆಗಳು ಸೇರಿ, ವರ್ಷಕ್ಕೆ ಕನಿಷ್ಠ ಎರಡು ವಾಣಿಜ್ಯ  ಬೆಳೆಗಳನ್ನು ಪಂಪ್ ಸೆಟ್ ನೀರಾವರಿ ಜಮೀನುಗಳ ಪ್ರದೇಶವನ್ನು ಆಯ್ಕೆ ಮಾಡಿ ಕೊಂಡಿರುವುದನ್ನು ನಾವು ವಿರೋಧಿಸುತ್ತೇವೆ.ಆಯ್ಕೆ ಮಾಡಿಕೊಂಡ ಎಲ್ಲ ಜಮೀನುಗಳು ಅತ್ಯಂತ ಫಲವತ್ತಾದ ನೀರಾವರಿ ಜಮೀನುಗಳಾಗಿವೆ. ಈ ಎಲ್ಲ ಜಮೀನುಗಳನ್ನು ರೈತ ಕುಟುಂಬಗಳು ಹಲವು ತಲೆಮಾರುಗಳಿಂದ ಶ್ರಮಪಟ್ಟು ಬಂಡವಾಳ ತೊಡಗಿಸಿ ಫಲವತ್ತಾದ ಜಮೀನುಗಳಾಗಿ ಬದಲಾಯಿಸಿದ್ದಾರೆ. ಇವುಗಳಲ್ಲಿ ಗ್ರಾಮಗಳ ಕೃಷಿ ಕೂಲಿಕಾರರ ಶ್ರಮವು ಅಡಗಿದೆ. ಈ ಫಲವತ್ತಾದ ಜಮೀನುಗಳು ರೈತ ಕುಟುಂಬಗಳಿಗೆ ಮಾತ್ರವಲ್ಲಾ ಸುತ್ತ ಮುತ್ತಲಿನ ಗ್ರಾಮಗಳ  ಕೂಲಿಕಾರರ ವರ್ಷವಿಡೀ ಕೆಲಸ ಒದಗಿಸುವ ಮೂಲಕ ಜೀವನಾಧಾರವು ಆಗಿವೆ.
    ಅದು ಮಾತ್ರವೇ ಅಲ್ಲಾ, ಭೂ ಸ್ವಾಧೀನ ಕಾಯ್ದೆ -2013 ಕೂಡಾ ಫಲವತ್ತಾದ ಜಮೀನುಗಳ ಸ್ವಾಧೀನ ಮಾಡಬಾರದು ಎಂದು ಹೇಳುತ್ತದೆ. ಈ ಭೂ ಸ್ವಾಧೀನವು ಕಾಯ್ದೆಯ ವಿರುದ್ಧವಾಗಿದೆ.ಮೇಲಾಗಿ ಕೃಷಿಯಲ್ಲಿ ತೊಡಗಿದ ಯಾವುದೇ ರೈತ ಕುಟುಂಬದ ಒಪ್ಪಿಗೆ ಇರುವುದಿಲ್ಲ. ಹೀಗಾಗಿ ಫಲವತ್ತಾದ ಈ ಜಮೀನುಗಳ ಸ್ವಾಧೀನ ಪ್ರಕ್ರಿಯೆಯನ್ನು ಈ ಕೂಡಲೆ ನಿಲ್ಲಿಸಲು ಒತ್ತಾಯಿಸುತ್ತೇವೆ. ಪವರ್ ಗ್ರಿಡ್ ಗಾಗಿ ಬೇರೆ ಕಡೆ ಹೋಗಲು ಮನವಿ ಮಾಡುತ್ತೇವೆ ಎಂದು
ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಜಿ.ನಾಗರಾಜ್ ರಾಜ್ಯ ಉಪಾಧ್ಯಕ್ಷರಾದ ಯು. ಬಸವರಾಜ್.ಜಿಲ್ಲಾ ಮುಖಂಡರಾದ ದೊಡ್ಡನಗೌಡ, ಯಲಬುರ್ಗಾ ತಾಲೂಕಿನ ಮುಖಂಡರಾದ ಅಬ್ದುಲ್ ರಜಾಕ್.ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಖಾಸಿಮ್ ಸರದಾರ್. ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ತುಕಾರಾಮ್ ಬಿ. ಪಾತ್ರೋಟಿ. ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್. ರೈತ ಮುಖಂಡರಾದ ಮಹೇಶ್ ಕುಮಾರ್ ಹಿರೇಮಠ. ಯಲ್ಲನಗೌಡ ಹಾಳಕೇರಿ. ಶಾಂತಯ್ಯ ಹಿರೇಮಠ. ಗವಿಸಿದ್ದಯ್ಯ ಹಿರೇಮಠ. ದೇವೇಂದ್ರ ಗೌಡ ಮಾಲಿಪಾಟೀಲ್. ಅಡಿವೆಪ್ಪ ವದ್ನಾಳ. ಸಿದ್ದಪ್ಪ ಶಿವಪೂಜಿ. ಚೆನ್ನಪ್ಪ ಮೂಗ್ತಿ. ಸಣ್ಣೆಪ್ಪ ಹರಿಜನ್. ಯಲ್ಲಪ್ಪ ಹರಿಜನ್. ಶಿವಪ್ಪ ಹರಿಜನ್. ಶಾಂತಮ್ಮ ಶಿವಪೂಜಿ. ಹನುಮಮ್ಮ ಮೂಗ್ತಿ. ಗವಿಸಿದ್ದಯ್ಯ ಸಸಿ. ಅಡಿವೆಮ್ಮ ಹರಿಜನ್. ಸುಶೀಲಮ್ಮ ಬುಡಶೆಟ್ನಾಳ. ಹಂಪಮ್ಮ ಮಾಲಿ ಪಾಟೀಲ್ ಮುಂತಾದವರು ಭಾಗವಹಿಸಿದ್ದರು.

ಜನ ಆಕ್ರೋಶ ಪತ್ರಿಕೆಗೆ ಜಾಹಿರಾತು ಮತ್ತು ಸುದ್ದಿ ಹಾಗೂ ಲೇಖನಗಳನ್ನು ನೀಡಲು ನೇರವಾಗಿ ಸಂಪಾದಕರೊಂದಿಗೆ ವ್ಯವಹರಿಸಿ ಮತ್ತು ಮಾತನಾಡಿ. ನಕಲಿ ಪತ್ರಕರ್ತರು, ನಕಲಿ ವರದಿಗಾರರ ಸಂಖ್ಯೆ ಹೆಚ್ಚಾಗಿದ್ದು ಸರ್ಕಾರಿ ನೌಕರರನ್ನು ಗುತ್ತಿಗೆದಾರರನ್ನು ಏಮಾರಿಸುವ ಕಾರ್ಯ ನಡೆಯುತ್ತಿದೆ. ಒಂದೇ ಒಂದು ವಾಕ್ಯ ಬರೆಯಲು ಬಾರದವನ ಕೈಯಲ್ಲಿ ಮೈಕು ಮತ್ತು ವಾಹನಕ್ಕೆ ಪ್ರೆಸ್‌ ಎಂದು ಬರೆದಿರುತ್ತದೆ. ಇವರೆಲ್ಲಾ ಖದೀಮರು! ಖದೀಮರ ಬದುಕು ನರಕವಾಗಬೇಕು ಎಂದರೆ ಜನರು ಜಾಗೃತರಾಗಬೇಕು.

ಲಕ್ಷ್ಮೀಕಾಂತ ನಾಯಕ, ಸಂಪಾದಕರು ಜನ ಆಕ್ರೋಶ ಪತ್ರಿಕೆ. ಮೊಬೈಲ್‌ ಸಂಖ್ಯೆಗಳು: 9845968164/9886535957  email: [email protected]

 

WhatsApp Group Join Now
Telegram Group Join Now

Related Posts