ಅಪರಾಧ

ವಿವಿಧ ಕಡೆ ಅಬಕಾರಿ ದಾಳಿ

WhatsApp Group Join Now
Telegram Group Join Now

ವಿವಿಧ ಕಡೆ ಅಬಕಾರಿ ದಾಳಿ

ಯಾದಗಿರಿ : ಏಪ್ರಿಲ್ 05,: ಭಾರತ ಚುನಾವಣಾ ಆಯೋಗವು ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ಘೋಷಿಸಿ 2024ರ ಮಾರ್ಚ್ 16 ರಿಂದ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಚುನಾವಣೆ ಶಾಂತಿಯುತವಾಗಿ ನಿಷ್ಪಕ್ಷಪಾತವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮವಹಿಸಲು ಜಿಲ್ಲೆಯ ವ್ಯಾಪ್ತಿಯಲ್ಲಿ ನಕಲಿ ಮದ್ಯ, ಅಕ್ರಮ ಮದ್ಯ, ಕಲಬೆರಕೆ ಸೇಂದಿ, ಕಳ್ಳಭಟ್ಟಿ ಸಾರಾಯಿ ಹಾಗೂ ಇತರೆ ಅಬಕಾರಿ ಅಕ್ರಮ ಪದಾರ್ಥಗಳ ತಯಾರಿಕೆ ಸಾಗಾಣಿಕೆ ಸಂಗ್ರಹಣೆ ಹಾಗೂ ಮಾರಾಟಗಳಂತಹ ಅಕ್ರಮ ಚಟುವಟಿಕೆಗಳು ನಡೆಯದಂತೆ ಚುನಾವಣಾ ಆಯೋಗದ ನಿರ್ದೇಶನದಂತೆ ಕ್ರಮ ಕೈಗೊಂಡಿರುವ ಮಾಹಿತಿ ಸಲ್ಲಿಸಲಾಗಿದೆ ಎಂದು ಯಾದಗಿರಿ ಅಬಕಾರಿ ಉಪ ಆಯುಕ್ತೆ ಶಾರದಾ ಸಿ.ಕೋಲಕಾರ ಅವರು ತಿಳಿಸಿದ್ದಾರೆ.
ಪ್ರಕರಣ ಸಂ.03, 2024ರ ಏಪ್ರಿಲ್ 04 ರಂದು ಪ್ರಕರಣ ಸಂ:01 ರನ್ವಯ ಮಾನ್ಯ ಅಬಕಾರಿ ಜಂಟಿ ಆಯುಕ್ತರು (ಜಾ ಮತ್ತು ತ) ಕಲಬುರಗಿ ವಿಭಾಗ ಕಲಬುರಗಿ ರವರ ಮತ್ತು ಮಾನ್ಯ ಅಬಕಾರಿ ಉಪ ಆಯುಕ್ತರು, ಯಾದಗಿರಿ ಜಿಲ್ಲೆ ಯಾದಗಿರಿ ರವರ ಮಾರ್ಗದರ್ಶನದಲ್ಲಿ ಗುರುಮಿಠಕಲ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಯಾದಗಿರಿ ಪಟ್ಟಣದಲ್ಲಿ ಗಸ್ತು ಮಾಡುತ್ತೀರುವ ಸಮಯದಲ್ಲಿ ಅಕ್ರಮವಾಗಿ ಮಾರುತಿ ಸುಜುಕಿ ಎಸ್ಸ ಪ್ರೇಸ್ಸೊ ನಾಲ್ಕು ಚಕ್ರದ ಕಾರ್ ವಾಹನ ನೊಂದಣಿ ಸಂ.ಏA-33-ಒ-9165 ನೇದ್ದರಲ್ಲಿ ಚಂದ್ರಕಾAತ ತಂದೆ ಬಸವರಾಜ ಕಲಾಲ ಎಂಬ ಆರೋಪಿತನು 90mಟx192ನ ಓರಿಜಿನಲ್ ಚಾಯ್ಸ ವಿಸ್ಕಿ ಟೆಟ್ರಾ ಪ್ಯಾಕೇಟಗಳನ್ನು ಹಾಗೂ 180mಟx28 ಬ್ಯಾಗ ಪೈಪರ್ ವಿಸ್ಕಿ ಟೆಟ್ರಾ ಪ್ಯಾಕೇಟಗಳನ್ನು ಹಾಗೂ 330ಒಐ ನ ಪಾವರ ಕೂಲ ಬೀಯರನ 48 ಟಿನ್ ಕ್ಯಾನಗಳು ಮತ್ತು 650ಒಐನ ಪಾವರ ಕೂಲ ಬೀಯರನ 24 ಬಾಟಲಿಗಳು ಹಿಗೇ ಒಟ್ಟು ಸದರಿ ನಾಲ್ಕು ಚಕ್ರದ ಕಾರಿನಲ್ಲಿ ಒಟ್ಟು 25.920 ಮದ್ಯ ಹಾಗೂ 31.440 ಲೀಟರನಷ್ಟು ಬೀಯರನ್ನು ಮಾರಾಟ ಮಾಡುವ ಉದ್ದೇಶದಿಂದ ತನ್ನ ನಾಲ್ಕು ಚಕ್ರ ವಾಹನದಲ್ಲಿ ಸಂಗ್ರಹಿಸಿಟ್ಟುಕೊAಡಾಗ ವಶಪಡಿಸಿಕೊಂಡಿದ್ದು ಆರೋಪಿತನನ್ನು ಬಂಧಿಸಿ ಘೋರ ಪ್ರಕರಣವನ್ನು ಶ್ರೀಶೈಲ್ ಒಡೆಯರ ಅಬಕಾರಿ ನಿರೀಕ್ಷಕರು ಅಬಕಾರಿ ಉಪ ಆಯುಕ್ತರ ಕಚೇರಿ ಯಾದಗಿರಿ ಜಿಲ್ಲೆ ಅವರು ಪ್ರಕರಣವನ್ನು ದಾಖಲಿಸಿದ್ದು ಅವುಗಳ ಅಂದಾಜು ಮೌಲ್ಯ 7,71,792 ರೂ.ಗಳು ಆಗಿರುತ್ತದೆ.

2024ರ ಏಪ್ರಿಲ್ 04 ರಂದು ಪ್ರಕರಣ ಸಂ.02 ರನ್ವಯ ಯಾದಗಿರಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಡಗೇರಾ ತಾಲ್ಲೂಕಿನ ನಾಯ್ಕಲ್ ಗ್ರಾಮದಲ್ಲಿ ಗಸ್ತು ಮಾಡುತ್ತೀರುವ ಸಮಯದಲ್ಲಿ ಅಕ್ರಮವಾಗಿ ದ್ವಿ ಚಕ್ರ ವಾಹನ ಹೊಂಡಾ ಯುನಿಕಾರ್ನ ವಾಹನ ನೊಂದಣಿ ಸಂ.ಏA-33-ಇA-6717 ನೇದ್ದರಲ್ಲಿ ಸಿದ್ದಪ್ಪ ತಂದೆ ಹೊನ್ನಪ್ಪ ಹಸನಾಪುರ ಎಂಬ ಆರೋಪಿತನು 90mಟ x 192 ನ ಓರಿಜಿನಲ್ ಚಾಯ್ಸ ವಿಸ್ಕಿ ಟೆಟ್ರಾ ಪ್ಯಾಕೇಟಗಳನ್ನು (ಒಟ್ಟು 17.280 ಲೀ ಮದ್ಯ) ಮತ್ತು 15.600 ಲೀಟರನಷ್ಟು ಬೀಯರನ್ನು ಮಾರಾಟ ಮಾಡುವ ಉದ್ದೇಶದಿಂದ ತನ್ನ ದ್ವಿ ಚಕ್ರ ವಾಹನದಲ್ಲಿ ಸಂಗ್ರಹಿಸಿಟ್ಟುಕೊAಡಾಗ ವಶಪಡಿಸಿಕೊಂಡಿದ್ದು ಆರೋಪಿತನನ್ನು ಬಂಧಿಸಿ ಘೋರ ಪ್ರಕರಣವನ್ನು ಶ್ರೀ ಬಸವರಾಜ ಬಿ ರಾಜಣ್ಣವರ ಅಬಕಾರಿ ಉಪ ನಿರೀಕ್ಷಕರು ಅಬಕಾರಿ ಉಪ ಆಯುಕ್ತರ ಕಚೇರಿ ಯಾದಗಿರಿ ಜಿಲ್ಲೆ ಅವರು ಪ್ರಕರಣವನ್ನು ದಾಖಲಿಸಿದ್ದು ಅವುಗಳ ಅಂದಾಜು ಮೌಲ್ಯ 1,25,800 ಆಗಿರುತ್ತದೆ.

ದಿನಾಂಕ:04-04-2024 ರಂದು ಪ್ರಕರಣ ಸಂ.03 ರನ್ವಯ ಮಧ್ಯಾಹ್ನ 03.00 ಗಂಟೆಗೆ ಯಾದಗಿರಿ ಜಿಲ್ಲೆಯ, ಗುರುಮಿಠಕಲ್ ಪಟ್ಟಣದಲ್ಲಿ ಗಸ್ತು ಮಾಡುತ್ತಿರುವಾಗ ಖಚಿತವಾದ ಬಾತ್ಮಿಯಂತೆ ಗುರುಮಠಕಲ್ ತಾಲ್ಲೂಕಿನ ನಸಲವಾಯಿ ಗ್ರಾಮದ ಸತ್ಯಪ್ಪ ತಂದೆ ಭೀಮಯ್ಯ ಎಂಬ ಆರೋಪಿತ ವಾಸಿಸುವ ಮನೆಯ ಮೇಲೆ ಪಂಚರೊAದಿಗೆ ಅಬಕಾರಿ ದಾಳಿ ಮಾಡಿದಾಗ ಮನೆಯಲ್ಲಿ ಅಕ್ರಮವಾಗಿ ಮಾರಾಟದ ಉದ್ದೇಶಕ್ಕಾಗಿ ಸಂಗ್ರಹಿಸಿಟ್ಟ 90 ಎಮ್.ಎಲ್ ನ ಓ.ಆರ್.ಸಿ ವಿಸ್ಕಿಯ 10 ರಟ್ಟಿನ ಪೆಟ್ಟಿಗೆಳಲ್ಲಿ ಪ್ರತಿಯೊಂದರಲ್ಲಿ ತಲಾ 96 ರಂತೆ ಒಟ್ಟು 960 ಮದ್ಯದ ಟೆಟ್ರಾ ಪ್ಯಾಕ್ ಗಳು (ಒಟ್ಟು 86.400 ಲೀ ಮದ್ಯ) ಜಪ್ತುಪಡಿಸಿಕೊಳ್ಳಲಾಯಿತು. ಇದು ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ 13, 14, 15, ಪ್ರಕಾರ, ಉಲ್ಲಂಘನೆಯಾಗಿದ್ದು ಇದೆ ಕಾಯ್ದೆಯ ಕಲಂ 32(1), 38(ಎ) ಹಾಗೂ 43 ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದ್ದು, ಪ್ರಯುಕ್ತ ಸದರಿ ಮುದ್ದೆಮಾಲನ್ನು ಪಂಚನಾಮೆಯಡಿ ಜಪ್ತಿಪಡಿಸಿ, ಇಲಾಖಾ ವಶಕ್ಕೆ ಪಡೆದು ಪ್ರಕರಣವನ್ನು ದಾಖಲಿಕೊಳ್ಳಲಾಗಿದೆ. ಎ1 ಆರೋಪಿತನನ್ನು ಅಬಕಾರಿ ಕಾನೂನಿನಡಿಯಲ್ಲಿ ಬಂಧನಗೊಳಿಸಿ ಸಿ.ಆರ್.ಪಿ.ಸಿ ಕಲಂ 41(1)(ಎ) ರಡಿ ವಿಚಾರಣಾ ನೋಟಿಸ್ ನೀಡಿ ಬಿಡುಗಡೆ ಗೊಳಿಸಲಾಗಿದೆ ಹಾಗೂ ಎ2 ಆರೋಪಿಯಾದ ಮನೆಯ ಮಾಲೀಕ ತನಿಖೆ ಸಮಯದಲ್ಲಿ ಪತ್ತೆಹಚ್ಚಿ ಬಂಧಿಸಬೇಕಾಗಿರುತ್ತದೆ.

2024ರ ಏಪ್ರಿಲ್ 04 ರಂದು ಪ್ರಕರಣ ಸಂ.04 ರನ್ವಯ ಸಾಯಂಕಾಲ 4.30 ಗಂಟೆಗೆ ಗುರುಮಿಠಕಲ್ ತಾಲ್ಲೂಕಿನ ಅನಪುರ ಗ್ರಾಮದಲ್ಲಿ ಗಸ್ತು ಕಾರ್ಯ ಮಾಡುತ್ತಿರುವ ಸಮಯದಲ್ಲಿ ಖಚಿತ ಬಾತ್ಮಿ ಬಂದಿದ್ದು, ಬಾತ್ಮಿ ಏನೆಂದರೆ ತೆಲಂಗಾಣ ರಾಜ್ಯದ ನಾರಾಯಣಪೇಟ್ ಜಿಲ್ಲೆಯ ಜಲಾಲಪುರ ಗ್ರಾಮದಿಂದ ಕರ್ನಾಟಕ ರಾಜ್ಯದ ಗಡಿಭಾಗದ ನಸಲವಾಯಿ ಗ್ರಾಮದ ಮಾರ್ಗವಾಗಿ ವಂಕಸAಬರ ಗ್ರಾಮಕ್ಕೆ ತೆಲಂಗಾಣ ರಾಜ್ಯದ ಮದ್ಯ ಹಾಗೂ ಬೀಯರನ್ನು ದ್ವಿಚಕ್ರ ವಾಹನದ ಮೇಲೆ ಸಾಗಾಣಿಕೆ ಮಾಡುವ ಬಾತ್ಮಿಯಂತೆ ಪಂಚರೊAದಿಗೆ ನಸಲವಾಯಿ ಗ್ರಾಮದ ಈಶ್ವರ ದೇವಸ್ಥಾನದ ಮುಂಬಾಗದಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಾ ನಿಂತೆವು ಆಗ ಸ್ವಲ್ಪ ಸಮಯದ ನಂತರ ತೆಲಂಗಾಣ ರಾಜ್ಯದ ನಾರಾಯಣಪೇಟ್ ಜಿಲ್ಲೆಯ ಜಲಾಲಪುರ ಗ್ರಾಮದ ಕಡೆಯಿಂದ ಕಪ್ಪು ಮತ್ತು ನೇರಳೆ ಬಣ್ಣದ ಸ್ಪ್ಲೆಂಡರ್ ಪ್ಲಸ್ ದ್ವಿಚಕ್ರ ವಾಹನವನ್ನು ಕಂಡು ಅದನ್ನು ಕೈ ಸನ್ನೆಯ ಮೂಲಕ ತಡೆದು ನಿಲ್ಲಿಸಿದಾಗ ಸದರಿ ವಾಹನದ ಮೇಲೆ ಹಳದಿ-ನೀಲಿ ಮಿಶ್ರಿತಾ ಗೊಬ್ಬರದ ಚೀಲವನ್ನು ಇಟ್ಟು ಕೊಂಡು ಬಂದಿದ್ದ ಅದನ್ನು ತೆಗೆದು ನೋಡಿದಾಗ ಅದರಲ್ಲಿ 1) 180 ಎಮ್.ಎಲ್ ಐ.ಬಿ ವಿಸ್ಕಿಯ 10 ಬಾಟಲಿಗಳು (ಒಟ್ಟು 1.800 ಲೀ ಮದ್ಯ), 2) 180 ಎಮ್.ಎಲ್ ಎಮ್.ಸಿ ನಂ.01 ವಿಸ್ಕಿಯ 10 ಬಾಟಲಿಗಳು (ಒಟ್ಟು 1.800 ಲೀ ಮದ್ಯ), 3) 650 ಎಮ್.ಎಲ್ ನ ಕೆ.ಎಫ್ ಸ್ಟ್ರಾಂಗ್ ಬೀಯರ್ ನ 36 ಬಾಟಲಿಗಳು (23.400 ಲೀ ಬೀಯರ್) ಈ ರೀತಿಯಾಗಿ ಒಟ್ಟು 3.600 ಲೀ ಮದ್ಯ (ತೆಲಂಗಾಣ ರಾಜ್ಯದಲ್ಲಿ ಮಾತ್ರ ಮಾರಾಟಕ್ಕಿರುವ) ಹಾಗೂ 23.400 ಲೀ ಬೀಯರ್ (ತೆಲಂಗಾಣ ರಾಜ್ಯದಲ್ಲಿ ಮಾತ್ರ ಮಾರಾಟಕ್ಕಿರುವ) ಅಕ್ರಮವಾಗಿ ದ್ವಿಚಕ್ರ ವಾಹನದ ಮೇಲೆ ಮದ್ಯ ಹಾಗೂ ಬೀಯರ್ ಸಾಗಾಣಿಕೆ ಮಾಡುತ್ತಿರುವ ಕಂಡುಬAದಿದ್ದು, ಆರೋಪಿಯಾದ ಶ್ರೀಕುಮಾರ ತಂದೆ ಸೋಮಶೇಖರ್ ವಯಸ್ಸು: 19 ವರ್ಷ, ಜಾತಿ: ಹೂಗಾರ್, ಉದ್ಯೋಗ ಕೂಲಿ ಮತ್ತು ಆರೋಪಿತನ ದ್ವಿಚಕ್ರ ವಾಹನ ಕಪ್ಪು ಮತ್ತು ನೇರಳೆ ಬಣ್ಣದ ಸ್ಪ್ಲೆಂಡರ್ ಪ್ಲಸ್ ನೊಂದಣಿ ಸಂಖ್ಯೆ.ಖಿS 38 3635 ಚಾಸ್ಸಿ ನಂ. ಒಃಐಊಂW126ಒಊಒ81656 ಹಾಗೂ ಇಂಜಿನ್ ನಂ.ಊA11ಇಙಒಊಒ63491 ಎಲ್ಲಾ ಮದ್ಯ, ಬೀಯರ್ ಮತ್ತು ದ್ವಿಚಕ್ರ ವಾಹನ ಹಾಗೂ ಆರೋಪಿಯನ್ನು ಇಲಾಖೆಯ ವಶಕ್ಕೆ ಪಡೆಯಲಾಯಿತು. ಇದು ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ 11, 12, 14 ಹಾಗೂ 15, ರ ಉಲ್ಲಂಘನೆಯಾಗಿದ್ದು ಇದೆ ಕಾಯ್ದೆಯ ಕಲಂ 32(1), 38(ಎ) ಹಾಗೂ 43 ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದ್ದು ಈ ಪ್ರಯುಕ್ತ ಪ್ರಕರಣವನ್ನು ದಾಖಲಿಕೊಳ್ಳಲಾಗಿದೆ. ಸದರಿ ಪ್ರಕರಣದ ಎ1 ಆರೋಪಿಯಾದ ಶ್ರೀಕುಮಾರ ತಂದೆ ಸೋಮಶೇಖರ್ ಈತನನ್ನು ಅಬಕಾರಿ ಕಾನೂನಿನಡಿಯಲ್ಲಿ ಬಂಧನಗೊಳಿಸಿ ಸಿ.ಆರ್.ಪಿ.ಸಿ ಕಲಂ41(1)(ಎ) ರಡಿ ವಿಚಾರಣಾ ನೋಟಿಸ್ ನೀಡಿ ಬಿಡುಗಡೆ ಗೊಳಿಸಲಾಗಿದೆ ಹಾಗೂ ಎ2 ಆರೋಪಿಯಾದ ವಾಹನದ ಮಾಲೀಕನ್ನು ತನಿಖಾ ಸಮಯದಲ್ಲಿ ಪತ್ತೆಹಚ್ಚಿ ಬಂಧಿಸಬೇಕಾಗಿರುತ್ತದೆ.

ಸದರಿ ಈ ಮೇಲಿನಂತೆ ಕೈಗೊಂಡ 04 ಪ್ರಕರಣಗಳಲ್ಲಿ ಶ್ರೀ ಆನಂದ ಉಕ್ಕಲಿ, ಅಬಕಾರಿ ಉಪ ಅಧೀಕ್ಷಕರು ಉಪ ವಿಬಾಗ ಶಹಾಪುರ, ಶ್ರೀಶೈಲ್ ಒಡೆಯರ್ ಅಬಕಾರಿ ನಿರೀಕ್ಷಕರು ಹಾಗೂ ಶ್ರೀ ಬಸವರಾಜ ರಾಜಣ್ಣವರ ಅಬಕಾರಿ ಉಪ ನಿರೀಕ್ಷಕರು, ಜಿಲ್ಲಾ ವಿಚಕ್ಷಣದಳ ಯಾದಗಿರಿ, ಶ್ರೀಮತಿ ರೇಣುಕಮ್ಮ ಹಾಗೂ ಶ್ರೀ ಅಶೋಕ ರಾಠೋಡ ಅಬಕಾರಿ ಉಪ ನಿರೀಕ್ಷಕರು, ವಲಯ ಯಾದಗಿರಿ, ಅಬಕಾರಿ ಮುಖ್ಯ ಪೇದೆಯಾದ ಶ್ರೀ ಅನಿಲ್ ಕುಮಾರ, ಅಬಕಾರಿ ಪೇದೆಯಾದ ಶ್ರೀ ಪ್ರವೀಣಕುಮಾರ, ಶ್ರೀ ಶಿವಶರಣಪ್ಪ ಮತ್ತು ಶ್ರೀ ನೀಲಕಂಟಪ್ಪ, ವಾಹನ ಚಾಲಕರಾದ ಶ್ರೀ ಶಂಕರ ಮೇದಾ ಮತ್ತು ಶ್ರೀ ದೊಂಡಿಬಾ ಜಾಧವ ಹಾಗೂ ಗೃಹ ರಕ್ಷಕ ಸಿಬ್ಬಂದಿಯಾದ ಅರ್ಜುನ ಕುಮಾರ, ಶಿವುಕುಮಾರ ಮತ್ತು ಶ್ರೀ ಅನಿಲ್ ಕುಮಾರ ಭಾಗವಹಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp Group Join Now
Telegram Group Join Now

Related Posts